Posts

Showing posts from July 2, 2022

Chartered Accountant's day July 1

Image
    JUL 1 ಚಾರ್ಟರ್ಡ್ ಅಕೌಂಟೆಂಟ್  ಚಾರ್ಟರ್ಡ್ ಅಕೌಂಟೆಂಟರುಗಳ  ದಿನ ಜುಲೈ  1ರ  ದಿನ  ‘ಚಾರ್ಟರ್ಡ್ ಅಕೌಂಟೆಂಟ್’ಗಳ  ದಿನವೆಂದು ಪರಿಗಣಿತವಾಗಿದೆ.  ಜುಲೈ 1, 1949ರಂದು  ಸಂವಿಧಾನದಡಿಲ್ಲಿನ ಚಾರ್ಟರ್ಡ್ ಅಕೌಂಟೆಂಟ್  ಕಾಯಿದೆಯ  ಪ್ರಕಾರ  ‘ದಿ ಇನ್ಸ್ಟಿಟ್ಯೂಟ್  ಆಫ್ ಚಾರ್ಟರ್ಡ್  ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ  ಅಸ್ತಿತ್ವಕ್ಕೆ  ಬಂತು. ಈ  ಸಂಸ್ಥೆಯು  ‘ಐಸಿಎಐ(ICAI)’  ಎಂಬ  ಕಿರುರೂಪದಿಂದ  ಪ್ರಖ್ಯಾತವಾಗಿದೆ.     ಚಾರ್ಟರ್ಡ್  ಅಕೌಂಟೆಂಟ್ಗಳು  ವೃತ್ತಿಪರ  ಸಾಂಸ್ಥಿಕ  ಲೆಕ್ಕಪತ್ರ ನಿರ್ವಹಣೆ  ಮತ್ತು  ಲೆಕ್ಕ  ಪರಿಶೋಧಕರಾಗಿ  ಈ  ಸಂಸ್ಥೆಯ  ಮೂಲಕ  ಪರಿಣತಿಯನ್ನು  ಸಾಧಿಸಿರುತ್ತಾರೆ.   ಈ  ರೀತಿ  ಪರಿಣತಿ ಸಾಧಿಸಿರುವ   ಅತೀ ಹೆಚ್ಚು  ಸದಸ್ಯತ್ವ ಸಂಖ್ಯೆ ಹೊಂದಿರುವ  ದೃಷ್ಟಿಯಿಂದ  ಈ  ಐಸಿಎಐ ಸಂಸ್ಥೆಯು    ‘ಅಮೆರಿಕನ್ ಇನ್ಸ್ಟಿಟ್ಯೂಟ್  ಆಫ್  ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್‘  ನಂತರದಲ್ಲಿ  ವಿಶ್ವದ  ತನ್ನ ಇತರ  ಸಮಾನೋದ್ದೇಶಿತ ಸಂಸ್ಥೆಗಳ  ಪಟ್ಟಿಯಲ್ಲಿ  ಎರಡನೇ  ಸ್ಥಾನದಲ್ಲಿದೆ.      ಎಲ್ಲಾ   ಭಾರತೀಯ  ಸಂಸ್ಥೆಗಳೂ ಖಡ್ಡಾಯವಾಗಿ  ಅನುಸರಿಸಬೇಕಾದ   ಲೆಕ್ಕಪತ್ರ  ನಿರ್ವಹಣೆ ಮತ್ತು  ಲೆಕ್ಕಪತ್ರ  ಪರಿಶೋಧನಾ  ನೀತಿ ನಿಯಮಗಳನ್ನು ವಿಧಿಸುವ  ಅಧಿಕಾರ  ಈ ಸಂಸ್ಥೆಗಿದೆ.   ಈ  ನಿಟ್ಟಿನಲ್ಲಿ  ಸಂಸ್ಥೆಯು  ಭಾರತ ಸರ್ಕಾರ,  ರಿಸರ್ವ್ ಬ್ಯಾಂಕ್  ಹಾಗೂ  ಸೆಕ್ಯೂರಿಟೀಸ್  ಅಂಡ್  ಎಕ್ಸ್ಚೆಂಜ್ ಬೋರ್ಡ್ ಆಫ್  ಇಂಡಿ

ಜಗದ ಜ್ವರಕ್ಕೆ ಎದೆಹಾಲ ಔಷಧ: ‘ಸಮಗಾರ ಭೀಮವ್ವ

Image
  KANNADA ODONA.... ಲಲಿತ  “ಇಂದಿನ ಮೂಲಭೂತವಾದ, ಜನಾಂಗದ್ವೇಷ, ಯುದ್ಧದಾಹಗಳು ನಮ್ಮನ್ನು ತಾಯ್ತನದ ಸೈರಣೆ, ಮಮತೆ, ಒಳಗೊಳ್ಳುವಿಕೆಯಿಂದ ವಿಮುಖಗೊಳ್ಳುವಂತೆ ಮಾಡಿವೆ. ವ್ಯಾಪಾರೀಕರಣದಿಂದ ಉಂಟಾದ ಸಾಂಸ್ಕೃತಿಕ ಮಾಲಿನ್ಯ, ನ್ಶೆತಿಕ ಪತನಗಳು ಕ್ರೌರ್ಯದ ನಾನಾ ಆಕಾರ ತಾಳಿ ದಿಗಿಲು ಹುಟ್ಟಿಸುತ್ತಿವೆ” ಎನ್ನುತ್ತಾರೆ ಲೇಖಕಿ   ಗೀತಾ ವಸಂತ.  ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ಎಚ್ ಎಸ್ ಶಿವಪ್ರಕಾಶ್   ಅವರ  ’ಸಮಗಾರ ಭೀಮವ್ವ’  ಕವಿತೆಯ ಬಗ್ಗೆ ಚರ್ಚಿಸುತ್ತ, ದಾಹ, ಉದ್ವಿಗ್ನತೆಯಿಂದ ಬೇಯುತ್ತಿರುವ ಜಗತ್ತಿಗೆ ಅಗತ್ಯವಾದ ಶುದ್ಧ ಅನುಭಾವದ ನೆಲೆಗಳನ್ನು ವಿಶ್ಲೇಷಿಸಿದ್ದಾರೆ. ಎಚ್ ಎಸ್ ಶಿವಪ್ರಕಾಶರ ಕವಿತೆ ‘ಸಮಗಾರ ಭೀಮವ್ವ’ ದಲಿತ ಹೆಣ್ಣೊಬ್ಬಳ ಅಂತಃಸತ್ವವನ್ನು ಆಧ್ಯಾತ್ಮಿಕ ಅನುಭವಕ್ಕಿಂತ ಎತ್ತರದಲ್ಲಿಟ್ಟು ನೋಡುವ ಮೂಲಕ ತಾಯ್ತನದ ತಾತ್ವಿಕತೆಯೊಂದನ್ನು ಕಟ್ಟಿಕೊಡುತ್ತದೆ. ಅನುಭವ ಮತ್ತು ಅನುಭಾವಗಳ ಹೆಣಿಗೆಯಲ್ಲಿ ಮೂಡಿದ ಈ ವಿಶಿಷ್ಟ ಕಾವ್ಯಾನುಭೂತಿ ಕವಿತೆಯನ್ನು ಕನ್ನಡದ ಮಹತ್ವದ ಕವಿತೆಗಳಲ್ಲೊಂದಾಗಿಸಿದೆ. ಯೋಗಿ ನಾಗಲಿಂಗನ ಯೌಗಿಕ ಅನುಭವಗಳು ಹಾಗೂ ಲೌಕಿಕದ ತಳಮಳಗಳು ಕವಿತೆಯ ಆದಿ ಆಧಾರವಾಗಿದ್ದು, ಕೊನೆಯಲ್ಲಿ ಅದನ್ನು ಮೀರುವ ವಿಶ್ವಾತ್ಮಕ ಭಾವದಲ್ಲಿ ವಿರಮಿಸುತ್ತದೆ. ಒಂದು ಕಾಲ-ದೇಶದ ವಿವರಗಳಲ್ಲಿ ಕಾಲೂರಿದ ಕವಿತೆಯು ಅದನ್ನು ದಾಟುತ್ತಾ ನಮ್ಮನ್ನು ಆವರಿಸಿಕೊಳ್ಳುತ್ತದೆ. ಕವಿತೆಯ ಧ್ವನಿ ಇಡೀ ಮನುಕುಲದ ಅಹವಾಲಿನಂತೆ ಕೇಳಿಸುವ